Slide
Slide
Slide
previous arrow
next arrow

ಗಂಗೆ ಒಲಿಸಿಕೊಂಡ ಗೌರಿಗೆ ‘ಜಲಗೌರಿ’ ಬಿರುದು; ಸಮ್ಮಾನ

300x250 AD

ಶಿರಸಿ: ಹಲವು ಅಡೆತಡೆಗಳ‌ ಮಧ್ಯೆ ಅಂಗನವಾಡಿ‌ ಮಕ್ಕಳಿಗೆ ಬಾವಿ ತೋಡಿ ನೀರು ತರಿಸಿದ ಇಲ್ಲಿನ ಗಣೇಶ ನಗರದ ಗೌರಿ ನಾಯ್ಕ ಅವರನ್ನು ಮಹಿಳಾ ದಿನಾಚರಣೆ ದಿನದಂದು ಅವರ ಸ್ವಗೃಹದಲ್ಲಿ ಸಂಸದ ಅನಂತಕುಮಾರ ಹೆಗಡೆ ಸಮ್ಮಾನಿಸಿದರು.

ಬಳಿಕ ಮಾತನಾಡಿದ ಸಂಸದ ಅನಂತಕುಮಾರ ಹೆಗಡೆ, ಯಾರ ಸಹಾಯ ಪಡೆಯದೇ, ಏಕಾಂಗಿಯಾಗಿ, ಏನೇ ತೊಂದರೆ ಬಂದರೂ ಎದುರಿಸಿ ಮಕ್ಕಳಿಗೆ ನೀರು ಕೊಟ್ಟ ಗೌರಿ ನಾಯ್ಕ ಅವರನ್ನು ಜಲ ಗೌರಿ ಎಂದು ಸಮ್ಮಾನಿಸುವುದಾಗಿ ಹೇಳಿದರು.

ಈ ವೇಳೆ‌ ಭಾಜಪಾದ ರೇಖಾ ಹೆಗಡೆ, ಶೋಭಾ ನಾಯ್ಕ, ಉಷಾ ಹೆಗಡೆ, ಗೀತಾ ಮಹಾಲಿಂಗಣ್ಣವರ್, ವೀಣಾ ಶೆಟ್ಟಿ, ರಾಜೇಶ ಶೆಟ್ಟಿ, ಕೃಷ್ಣ ಎಸಳೆ ಇತರರು ಇದ್ದರು. ಬಳಿಕ ಅಂಗನವಾಡಿ ಬಳಿ ತೆರಳಿ ಬಾವಿಯ ಜಲಕ್ಕೂ ಪುಷ್ಪಾರ್ಚನೆ ಮಾಡಿದರು.

300x250 AD

ಈ ವೇಳೆ ಪ್ರತಿಕ್ರಿಯೆ ನೀಡಿದ ಗೌರಿ, ಜಿಲ್ಲಾಡಳಿತ ಬಾವಿ ತೋಡಲು ಅವಕಾಶ ನೀಡದೇ ಇದ್ದಾಗ ಧೈರ್ಯ ನೀಡಿ, ಸಮಸ್ಯೆ ಬಗೆಹರಿಸಿದ ಸಂಸದರಿಗೆ ಕೃತಜ್ಞತೆ ‌ಸಲ್ಲಿಸುವುದಾಗಿ ಹೇಳಿದರು.

Share This
300x250 AD
300x250 AD
300x250 AD
Back to top